Monday, December 22, 2008

ನಿಮ್ಮೆಲ್ಲರ ಪ್ರೋತ್ಸಾಹಗಳಿಗೆ ನಾನು ಚಿರ ಋಣಿ...

ಎಲ್ಲರಿಗೂ ನಮಸ್ಕಾರಗಳು. ವ್ಯಾಸರು ನಮ್ಮೆಲ್ಲರನ್ನು ಬಿಟ್ಟು ಹೊರಟು ಹೋದಾಗ ಅದೇನೋ ಒಂದು ಅವ್ಯಕ್ತವಾದಂತಹ ಸಂಕಟ , ಮನಸ್ಸಿನಲ್ಲೊಂದು ತೊಳಲಾಟಗಳು ನಡೆಯುತ್ತಲೇ ಇದ್ದವು. ಅದು ಹಾಗೇ ಮುಂದುವರಿದಿದೆ. ಎಂ.ವ್ಯಾಸರು ನಾನು ಕಂಡುಕೊಂಡ ಮಟ್ಟಿಗೆ ಒಂದು ಅದ್ಭುತ ಪ್ರತಿಭೆ... ಅವರನ್ನು ಒಂದು ಸಣ್ಣ ಸಾಕ್ಷ್ಯ ಚಿತ್ರದ ಮೂಲಕ ಕಟ್ಟಿಕೊಡುವ, ಹಿಡಿದಿಡುವುದು ಕಷ್ಟಸಾಧ್ಯ. ಆದರೂ ಒಂದು ಸಣ್ಣ ಪ್ರಯತ್ನ ಮಾಡಿದೆ ತಮ್ಮೆಲ್ಲರ ಸಹಕಾರ, ಪ್ರೋತ್ಸಾಹಿಂದ. ಅದೇ ವ್ಯಾಸಪಥ.
ಒಂದು ತಿಂಗಳ ಹಿಂದೆ ಮೂಡಬಿದಿರೆಯಲ್ಲಿ ನಡೆದ ಮಿನಿ ಚಲನಚಿತ್ರೋತ್ಸವದಲ್ಲಿ ಗೆಳೆಯ ಶೇಖರ ಅಜೆಕಾರ್ ಉತ್ಸಾಹದಿಂದ ವ್ಯಾಸಪಥವನ್ನು ಪ್ರದರ್ಶಿಸಿದರು. ಸುಮಾರು ಒಂದೂವರೆ ಸಾವಿರದಷ್ಟು ಸಂಖ್ಯೆಯ ಜನ ಅದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದಕ್ಕೂ ಮುಂಚೆ ನನ್ನ ಆಪ್ತ ವಲಯ, ವ್ಯಾಸರ ಆಪ್ತ ವಲಯದ ಸ್ನೇಹಿತ ಬಳಗ ಈ ಸಾಕ್ಷ್ಯಚಿತ್ರವನ್ನು ನೋಡಿ ಮೆಚ್ಚಿಗೆ ಸೂಚಿಸಿದ್ದಾರೆ.
ಇದೀ ಹಿರಿಯರೂ, ಆತ್ಮೀಯರೂ, ಸ್ನೇಹಿತರೂ ಆದಂತಹ ಜಯಂತ ಕಾಯ್ಕಿಣಿಯವರು ವ್ಯಾಸಪಥವನ್ನು ವೀಕ್ಷಿಸಿ ಒಂದು ಮೆಚ್ಚುಗೆಯ ನುಡಿಯನ್ನಾಡಿದ್ದಾರೆ. ಅದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಡಾ.ವರದರಾಜ ಚಂದ್ರಗಿರಿ, ಡಾ.ಮಹಾಲಿಂಗ ಭಟ್, ಪ್ರೊ.ರಾಜ್ ಮೋಹನರ್ ರಾವ್, ಶ್ರೀಪೂರ್ಣ, ಅಕ್ಷತಾ ಸಿ.ಎಚ್, ಗೆಳೆಯರಾದ ನಾಗೇಂದ್ರ ತ್ರಾಸಿ, ಬಾಲಮುರಳಿ, ಮಹೇಶ್ ಪ್ರಭು, ಕಿರಣ್, ಈಶ್ವರ,ಸುನಿಲ್, ತಂಗಿ ದೀಷ್ಮಾ, ಚೈತನ್ಯ ಪರಾಡ್ಕರ್... ಹೀಗೆ ಅನೇಕಮಂದಿ ಮೆಚ್ಚಿ ಪ್ರೋತ್ಸಾಹದ ನುಡಿಗಳನ್ನಾಡಿದ್ದಾರೆ. ಅವರೆಲ್ಲರಿಗೂ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

Sunday, December 21, 2008

`ವ್ಯಾಸಪಥ' ಸಾಕ್ಷ್ಯಚಿತ್ರ ಬಿಡುಗಡೆ

ಮಂಗಳೂರು, ಡಿ.20:ಕಥೆಗಾರ ಎಂ.ವ್ಯಾಸ ಅವರನ್ನು ತಾತ್ವಿಕ ದೃಷ್ಠಿಕೋನದಲ್ಲಿ ನೋಡುವ ಕಾರ್ಯ ಆಗಬೇಕಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಎಂ.ವ್ಯಾಸ ಅವರ ಕೊಡುಗೆ ಅಪಾರ. ಅವರ ಸಾಹಿತ್ಯಗಳು ಮುಂದಿನ ಪೀಳಿಗೆಗೂ ಉಳಿಯುವಂತಾಗಲು ಅವುಗಳನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಉಳಿಯುವಂತೆ ಮಾಡಬೇಕಾಗಿದೆ. ಅವರ ಸಾಹಿತ್ಯದ ಕುರಿತಾದ ಸಿ.ಡಿ.ಗಳು, ಸಾಕ್ಷ್ಯಚಿತ್ರಗಳು ಇನ್ನೂ ಬರಬೇಕೆಂದು ಸಾಹಿತಿ,ವಿಮರ್ಷಕ ಡಾ.ಮಹಾಲಿಂಗ ಭಟ್ ಅಭಿಪ್ರಾಯಿಸಿದರು.
ಅವರು ಶನಿವಾರ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಪತ್ರಕರ್ತ ಹರೀಶ್ ಕೆ. ಆದೂರು ನಿದರ್ೇಶನದ `ವ್ಯಾಸಪಥ' ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಎಂ.ವ್ಯಾಸ ಅವರ ಸಮಗ್ರ ಕಥೆಗಳ ಸಂಕಲನವನ್ನು ಹೊರತರುವ ಚಿಂತನೆ ನಡೆಯುತ್ತಿದೆ. ವ್ಯಾಸ ಅವರ ಸ್ನೇಹ ತೆಕ್ಕೆಗೆ ಬಿದ್ದವರಿಗೆ ಮಾತ್ರ ಅವರನ್ನು ಸಮರ್ಪಕವಾಗಿ ಅಥರ್ೈಸಲು ಸಾಧ್ಯವಾಗಿದೆ. ಅವರ ಕಥೆಗಳು ಮಾಮೂಲಿಗಿಂತ ಭಿನ್ನವಾದಂತಹ ವಸ್ತುಗಳನ್ನೊಳಗೊಂಡಿವೆ ಎಂದು ಅತಿಥಿಗಳಾದ ಡಾ.ವರದರಾಜ ಚಂದ್ರಗಿರಿ ವ್ಯಾಖ್ಯಾನಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಅಂಕಣಗಾರ ಯು.ಮಹೇಶ್ ಪ್ರಭು `ವ್ಯಾಸಪಥ' ಸಾಕ್ಷ್ಯಚಿತ್ರ ಸಂಗ್ರಹಯೋಗ್ಯವಾಗಿದ್ದು ಮೌಲ್ಯಾಧಾರಿತವಾಗಿ ಮೂಡಿಬಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಿದ್ದರು.
ಎಂ.ವ್ಯಾಸರ ಪುತ್ರ ತೇಜಸ್ವಿ ವ್ಯಾಸ ಅವರಿಗೆ `ವ್ಯಾಸ ಪಥ' ಸಾಕ್ಷ್ಯಚಿತ್ರದ ಸಿ.ಡಿಯನ್ನು ಹಸ್ತಾಂತರಿಸಲಾಯಿತು.
ದೀಪಿಕಾ ಮತ್ತು ಬಳಗದಿಂದ ಪ್ರಾರ್ಥನೆ ನಡೆಯಿತು. ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ.ಕೃಷ್ಣಮೂತರ್ಿ ಸ್ವಾಗತಿಸಿದರು. ಪತ್ರಕರ್ತ ಹರೀಶ್ ಕೆ. ಆದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾದ ಅಕ್ಷತಾ ಭಟ್ ಸಿ.ಎಚ್. ವಂದಿಸಿದರು.
ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಭಾಷಾ ವಿಭಾಗ ಕಾರ್ಯಕ್ರಮ ಆಯೋಜಿಸಿತ್ತು.

























































Thursday, December 18, 2008

Wednesday, December 17, 2008

ನಿಮ್ಮಲ್ಲೊಂದು ಸಣ್ಣ ಕ್ಷಮೆ ಕೋರಿ...

ಸ್ನೇ ಹಿತರೇ... ಹೌದು ನಿಮ್ಮಲ್ಲೊಂದು ಸಣ್ಣ ಕ್ಷಮೆ ಕೋರಲೇ ಬೇಕಾಗಿದೆ. ಕೆಲಸದ ಒತ್ತಡಗಳಿಂದ `ವ್ಯಾಸಪಥ' ಬ್ಲಾಗ್ ಹಲವಾರು ಸಮಯಗಳಿಂದ ಹಾಗೇ ಉಳಿದುಕೊಂಡಿತ್ತು. ಹೊಸ ಹೊಸ ಲೇಖನ ವಿಚಾರಗಳಿಗೆ ಅವಕಾಶ ನೀಡಲು ಸಾಧ್ಯವಾಗಿಲ್ಲ. ಅದೇ ಸಮಯದಲ್ಲಿ ಎಂ. ವ್ಯಾಸ ಅವರ ಕುರಿತ ಸಾಕ್ಷ್ಯಚಿತ್ರವೊಂದನ್ನು ನಿಮಿಸಿದರೆ ಹೇಗೆಂಬ ಯೋಚನೆ ಮನದಲ್ಲಿ ಬಂತು. ಪರಿಣಾಮ ಕೇವಲ ಎರಡೇ ದಿನಗಳಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದೇವೆ. ಅವಸರವಸರದಲ್ಲಿ ಇದು ನಿಮಿಸಿದ್ದೇವೆ. ಒಪ್ಪು ತಪ್ಪು ಸಹಜ. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಿ ಪ್ರೋತ್ಸಾಹಿಸಿರುವಿರಾಗಿ ನಂಬುವೆ.

ಇಂತು ನಿಮ್ಮವ,

ಹರೀಶ್ .ಕೆ.ಆದೂರು


20ರಂದು ವ್ಯಾಸಪಥ ಬಿಡುಗಡೆ


ಗೋ ವಿಂದ ದಾಸ ಕಾಲೇಜು, ಸುರತ್ಕಲ್ , ಭಾಷಾ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಹರೀಶ್ ಕೆ. ಆದೂರು ನಿರ್ದೇಶನದ `ವ್ಯಾಸಪಥ' ಕಥೆಗಾರ ಎಂ.ವ್ಯಾಸ ಅವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಇದೇ 20ರಂದು ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಬೆಳಗ್ಗೆ 10.30 ನಡೆಯಲಿದೆ.
ಸಾಹಿತಿ ಡಾ.ಮಹಾಲಿಂಗ ಭಟ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ.
ಅತಿಥಿಗಳಾಗಿ ಡಾ. ವರದರಾಜ ಚಂದ್ರಗಿರಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.

Wednesday, August 27, 2008

Sunday, August 3, 2008



ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ಲೇಖನ



















ಪ್ರಜಾವಾಣಿಯಲ್ಲಿ ವ್ಯಾಸರ ಬಗೆಗಿನ ಲೇಖನ


`ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ವ್ಯಾಸರ ಬಗ್ಗೆ ಬಂದ ಲೇಖನ...

Friday, August 1, 2008


ಕೆ.ವಿ ತಿರುಮಲೇಶ್ ಅವರು ಆಳ ನಿರಾಳ ಅಂಕಣದಲ್ಲಿ ಎಂ.ವ್ಯಾಸರ ಬಗ್ಗೆ ಹೀಗೆ ಬರೆದಿದ್ದಾರೆ.

Sunday, July 27, 2008


ಅವರಲ್ಲೊಂದು ಕ್ಷಮೆ ಕೇಳಿ...

ರಡಕ್ಷರದ ಕಥೆಗಾರ ಎಂದೇ ಖ್ಯಾತಿ ಪಡೆದ ಎಂ.ವ್ಯಾಸ ನಮ್ಮೆಲ್ಲನ್ನು ಬಿಟ್ಟು ದೂರ ಹೋಗಿದ್ದಾರೆ...
ಒಂದೂವರೆ ತಿಂಗಳ ಹಿಂದೆ ಅವರ ಮನೆಗೆ ಹೋಗಿದ್ದೆ... ಅದು ಅಚಾನಕ್. ಹಾಗೇ ಊರಿಗೆ ಹೋದಾಗ ಅವರನ್ನು ಮಾತನಾಡಿಸುವ ಮನಸ್ಸಾಯಿತು. ಸಂಜೆ 5.30ರ ಹೊತ್ತಿಗೆ ಹೋಗಿದ್ದೆ...ಅವರು ಒಬ್ಬರೇ ಇದ್ದರು. ಒಂದಷ್ಟು ಹೊತ್ತು ಕುಳಿತು ಹರಟಿದೆವು. ಅವರ ಮೊಮ್ಮಗ ದೊಡ್ಡ ಲೋಟದಲ್ಲಿ ಚಹಾ ತಂದಿಟ್ಟ. `ಸರ್...ನಿಮ್ಮ ಬರಹಗಳನ್ನು ಒಂದು ಬ್ಲಾಗ್ನಲ್ಲಿ ಹಾಕಿದರೆ ಹೇಗೆ...' ಎಂದು ಹೇಳಿದ್ದೆ. `ಅದನ್ನು ಪುನಾ ನೀವು ಕುಟ್ಟಬೇಕಲ್ವಾ...ಯಾಕೆ ಅದೆಲ್ಲಾ...ಇನ್ನು...ಮಾಡೋದಾದ್ರೆ ಮಾಡಿ...' ಎಂದು ಹೇಳಿದ್ದರು... ಅದೇ ಮಾಮೂಲು ಗಡಿಬಿಡಿಯಲ್ಲಿ ಅದನ್ನು ಪೂರೈಸಲಾಗಲಿಲ್ಲ. ಇದ್ದಕ್ಕಿದ್ದಂತೆ ಆ ಮಹಾಚೇತನ ಮರೆಯಾದಾಗ ನೋವು ತಡಕೊಳ್ಳಲಾಗಿಲ್ಲ... ಇದೀಗ ಅವರು ದೂರ ಹೋಗಿದ್ದಾರೆ...ಅವರ ಅಗಾಧವಾದ ಸಾಹಿತ್ಯವನ್ನು ನಮ್ಮೆಲ್ಲರ ಮುಂದಿರಿಸಿ... ವ್ಯಾಸರು ದೂರ ಹೋಗಿದ್ದಾರೆ...ಅವರ ನೆನಪು ಎಂದೆಂದಿಗೂ ಹಚ್ಚ ಹಸಿರು... ಇದೀಗ ಅವರ ಬಗೆಗಿನ ಲೇಖನಗಳನ್ನು , ಮಾಹಿತಿಯನ್ನು ಕ್ರೋಢೀಕರಿಸುವುದು ನನ್ನ ಉದ್ದೇಶ, ಎಂ.ವ್ಯಾಸರ ಅಭಿಮಾನಿಗಳು ಇದಕ್ಕೆ ಸಹಕರಿಸುವ ಪೂರ್ಣ ಭರವಸೆ ನನ್ನದು..ಇಂತು ನಿಮ್ಮ ಪ್ರೀತಿಯ...

ಹರೀಶ್ ಕೆ.ಆದೂರು.


`ಎರಡಕ್ಷರದ' ಹಿರಿಮೆ

ಇನ್ನು ನೆನಪು ಮಾತ್ರ...


`` ಗಡಿನಾಡ ಕಾಸರಗೋಡಿನಲ್ಲಿದ್ದು ಕನ್ನಡ ಸಾರಸ್ವತ ಲೋಕಕ್ಕೆ ಅಗಾಧ ಕೊಡುಗೆ ನೀಡಿದವರು ಹಿರಿಯ ಕಥೆಗಾರ ಎಂ.ವ್ಯಾಸ. ಮನೆತುಂಬಾ ಪುಸ್ತಕ,ಗ್ರಂಥ, ಸಾಹಿತ್ಯ ಪತ್ರಿಕೆಗಳು..ಅಭಿಮಾನಿ ಓದುಗರ, ಹಿರಿ ಕಿರಿಯ ಸಾಹಿತಿಗಳ ಪತ್ರಗಳ ರಾಶಿ...ಈ ನಡುವೆ ಎಂ.ವ್ಯಾಸ. ಕಾಸರಗೋಡಿನಲ್ಲಿದ್ದೇ ಕೇರಳ, ಕನರ್ಾಟಕ ಎರಡೂ ರಾಜ್ಯಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದರು.
ವ್ಯಾಸರೊಂದಿಗಿನ ಆತ್ಮೀಯ ಸಂಬಂಧ ಅದೊಂದು ಮರೆಯದ ಅನುಬಂಧ. ನಮ್ಮಂಥ ಕಿರಿಯರಲ್ಲೂ ಆ ಹಿರಿಯ ವ್ಯಕ್ತಿ ಅಂತಹ ಸ್ನೇಹ, ಪ್ರೀತಿ , ಆತ್ಮೀಯತೆಯನ್ನು ಇಟ್ಟುಕೊಳ್ಳುವ ವಿಶಾಲ ಹೃದಯ ಹೊಂದಿದ್ದರು. ಆ ಭಾಗ್ಯ ನನಗೂ ಒಲಿದು ಬಂದಿದೆ. ಇದೀಗ ಎಂ.ವ್ಯಾಸ ನಮ್ಮೆಲ್ಲರ ಬಿಟ್ಟು ಹೊರಟು ಹೊರಟು ಹೋಗಿದ್ದಾರೆ. ಹೃದಯ ಭಾರವಾಗುತ್ತಿದೆ... ಅವರೊಂದಿಗಿದ್ದ ಕ್ಷಣ ಕ್ಷಣಗಳೂ ನೆನಪಿಗೆ ಬರುತ್ತವೆ...ಕಣ್ಣು ಮಂಜಾಗುತ್ತವೆ... ಇನ್ನು ಅವರು ನೆನಪು ಮಾತ್ರ...

- ಹರೀಶ್ ಕೆ.ಆದೂರು

ಹೌದು... ಅವರೊಬ್ಬ ಸರಳ ಸಜ್ಜನ ಜೀವಿ... ಅವರು ಎರಡಕ್ಷರದ ಕಥೆಗಳಿಗೆ ಹೆಸರು ವಾಸಿ... ಅವರ ಹೆಸರೂ ಹಾಗೆ ಎರಡಕ್ಷರವೇ... ಅವರೇ ಹಿರಿಯ ಕಥೆಗಾರ ಎಂ. ವ್ಯಾಸ.
ಅವರ ಕಥೆಗಳಿಗೆ ಕೇವಲ ಎರಡಕ್ಷರಗಳ ಶೀಷರ್ಿಕೆ. ಈ ಕಾರಣಕ್ಕಾಗಿಯೇ ಎರಡಕ್ಷರದ ಕಥೆಗಾರ ಎಂದೇ ಖ್ಯಾತಿ ಪಡೆದಿದ್ದಾರೆ.`ದತ್ತ', `ತ್ರಿಜ್ಜ' , `ಕೆಂಡ' ಈ ರೀತಿ ಆಕರ್ಷಕ ಶೀಷರ್ಿಕೆ ಅವರದ್ದು. ಮಾಮೂಲಿಗಿಂತ ಭಿನ್ನವಾದ ಕಥೆಗಾರ ಅವರು.
ಅವರ ಕಥೆಯೂ ಹಾಗೆ ಒಂದು ವಿಭಿನ್ನವಾದುದು. ಅದು ಸುಂದರವಾದ ಹೂರಣ. ಅದು ಕಥೆಯಲ್ಲ...ಬದಲಾಗಿ ಅದೊಂದು ಘಟನೆಗಳ ಬುತ್ತಿ.ಚಿತ್ರಗಾರನ ಚಿತ್ರವಿದ್ದಂತೆ... ಕಥೆಯ ಬಗ್ಗೆ ಅವರು ಹೇಳುವ ರೀತಿಯೇ ಒಂದು ವಿಭಿನ್ನ ಅನುಭವ... ಆ ರೀತಿ ಅವರ ಕಥೆಗಳು ಸಾಗುತ್ತವೆ. ಅವರ ಕಥೆಯನ್ನೋದುವಾಗ ಅದೊಂದು ಚಿತ್ರಣದಂತೆ ಭಾಸವಾಗುತ್ತದೆ. ಆ ರೀತಿ ವ್ಯಾಸ ಅವರ ಕಥೆಗಳು ಓದುಗರಿಗೆ ಒಂದು ವಿಭಿನ್ನ , ಆಪ್ತ ಅನುಭವವನ್ನೀಯುತ್ತವೆ.
ಅವರ ಕವನಗಳೂ ಹಾಗೆಯೇ.
ವ್ಯಾಸ ಈ ಹೆಸರು ಕೇಳಿದರೆ ಅವರ ಕಥೆಗಳ ಒಂದೊಂದು ಸಾಲೂ ಮನಃದಲ್ಲಿ ಮೂಡಿಬರುತ್ತವೆ. ಸಪೂರವಾದ ನೀಳ ಕಾಯ. ಶ್ವೇತ ವರ್ಣದ ಅಂಗಿ, ಕಪ್ಪು ಕನ್ನಡಕ , ಉದ್ದದ ಕೂದಲು, ಕೋಲು ಮುಖ ಹೀಗೆ ಅವರ ಚಹರೆ ಕಣ್ಣಮುಂದೆ ಕಟ್ಟಿನಿಲ್ಲುತ್ತದೆ. ಆತ್ಮೀಯ ಜೀವಿ ಈ ವ್ಯಾಸ. ಈ ಅನುಭವ ಅವರೊಂದಿಗೆ ಅಷ್ಟೊಂದು ಒಡನಾಟ ಹೊಂದಿದವರಿಗೆ ಮಾತ್ರ ಚೆನ್ನಾಗಿ ಅರ್ಥವಾಗುತ್ತದಷ್ಟೆ. ಅಂತಹ ವ್ಯಾಸ ನಮ್ಮೆಲ್ಲರನ್ನು ಬಿಟ್ಟು ಹೊರಟೇ ಹೋಗಿದ್ದಾರೆ. ತಟ್ಟನೆ ಎದ್ದು ನಡೆದೇ ಬಿಟ್ಟಿದ್ದಾರೆ...ಇನ್ನೂ ಅವರು ಇದ್ದಾರೆಂಬ ಭಾವನೆ ಎಲ್ಲರ ಮನದಲ್ಲೂ ಹಾಗೇ ಉಳಿಸಿ...
ವ್ಯಾಸ ಎಲ್ಲರಂತಲ್ಲ. ನೇರ ಮಾತು.. ಪ್ರಶಸ್ತಿ , ಪ್ರಚಾರಗಳಿಗೆ ಓಲೈಸಿದವರಲ್ಲ.
ಅವರು ತನ್ನ ಕಪ್ಪು ಫ್ರೇಮಿನ ಕನ್ನಡಕ ಕೈಯಲ್ಲಿ ಹಿಡಿದು ಕಾಲ ಮೇಲೆ ಕಾಲು ಹಾಕಿ ಕುಳಿತು ಮಾತಿಗಿಳಿದರೆ ಒಂದೊಂದಾಗಿ ಘಟನೆಗಳು ಅವರ ಬಾಯಿಂದ ಬರುತ್ತವೆ. ಹಿರಿ ಕಿರಿಯ ಸಾಹಿತಿಗಳು, ಅವರ ಸಾಹಿತ್ಯ ಕೃತಿಗಳು, ಹೊಸ ತಲೆಮಾರಿನ ಸಾಹಿತ್ಯ ಮಿತ್ರರ ಒಡನಾಟ ಇವೆಲ್ಲವನ್ನೂ ಅವರು ಹೇಳುತ್ತಲೇ ಸಾಗುತ್ತಾರೆ. `ನಿಮಗಿವರನ್ನು ಗೊತ್ತುಂಟಾ... ಚೆನ್ನಾಗಿ ಬರೀತಾನೆ... ಒಳ್ಳೆ ಮನುಷ್ಯ ' ಹೀಗೆ ಒಬ್ಬೊಬ್ಬರ ಬಗ್ಗೆಯೂ ಸಾಕಷ್ಟು ಮಾಹಿತಿ ಹೊಂದಿದ ವ್ಯಾಸರ ಒಡನಾಟವೇ ಒಂದು ವಿಶಿಷ್ಠ ಅನುಭವನ್ನೀಯುತ್ತದೆ. ಅವರ ಮನೆಯೊಳಗೆ ಕುಳಿತು ಸಾಹಿತ್ಯದ ಚಚರ್ೆಗಳು, ವಿಮರ್ಷಗಳು ತೊಡಗಿದರಂತೂ ಹೊತ್ತು ಹೋಗುವುದೇ ಗೊತ್ತಾಗದು... ಗಡಿನಾಡ ಕಾಸರಗೋಡಿನಲ್ಲಿ ಹಸಿರ ಐಸಿಯ ನಡುವೆ ಕುಳಿತು ಅವರು ರಚಿಸದ ಸಾಹಿತ್ಯಗಳು ಇಂದು ಏರಿದ ಎತ್ತರ ಊಹಿಸಲಾಧ್ಯ.
ಯಾರ ಮನಸ್ಸನ್ನೂ ನೋಯಿಸದ ಅವರು ಓರ್ವಉತ್ತಮ ಕಥೆಗಾರರು. ಅಷ್ಟೇ ಅಲ್ಲದೆ ಕಥೆಯ ಬಗ್ಗೆ ಆಳವಾದ ಜ್ಞಾನ ಹೊಂದಿದವರು. ಎಂ ವ್ಯಾಸ ಕೇರಳದಲ್ಲಷ್ಟೇ ಅಲ್ಲ, ಕನರ್ಾಟಕದಲ್ಲೂ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
`ಕಥೆ ಬರೆಯುವುದು ಒಂದು ಕಲೆ. ಅದು ಹೇಳಿ ,ಕೇಳಿ ಬರುವಂತಹುದಲ್ಲ. ಅದು ಹೃದಯದಿಂದ ಬರುವಂತಹುದು. ಅದೊಂದು ಸಿದ್ದಿ, ಅನುಭವವೆ' ಎಂದು ಹೇಳುವ ವ್ಯಾಸರು ಸಾಹಿತ್ಯ ರಚನೆಯ ಸಂದರ್ಭದಲ್ಲಿ ಏಕಾಂತ ಬಯಸುತ್ತಾರೆ. ಯಾವೊಂದು ರಗಳೆಯೂ ಇಲ್ಲದೆ ತನ್ನಷ್ಟಕ್ಕೆ ಒಂಟಿಯಾಗಿ ವ್ಯಾಸರು ಕುಳಿತರೆ ಅಲ್ಲೊಂದು ಅದ್ಭುತ ಕಥೆ ರಚನೆಯಾಗುತ್ತದೆ.
`ಉಷಾ ಕಿರಣ' ಕನ್ನಡ ದೈನಿಕದಲ್ಲಿ ಅವರು ಬರೆದ `ಜನಪಥ' ಅಂಕಣ ಬರಹ ಜನಪ್ರಿಯತೆ ಪಡೆದಿತ್ತು. ಈ ಅಂಕಣ ಬರಹಗಳನ್ನು 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪ್ರಕಟಿಸಿ ಬಿಡುಗಡೆಗೊಳಿಸಿದೆ.



ಹೊಸದಿಗಂತ ದಿನಪತ್ರಿಕೆಯಲ್ಲಿ ಬಂದ ವರದಿ...


ಕನ್ನಡ ಪ್ರಭ ವರದಿ...


`ಕನ್ನಡ ಪ್ರಭ'ದಲ್ಲಿ ವ್ಯಾಸರ ಬಗೆಗಿನ ವರದಿ...


ಪ್ರಜಾವಾಣಿ ವರದಿ...


ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡ ವ್ಯಾಸರ ಬಗೆಗಿನ ಲೇಖನ

ಉದಯವಾಣಿಯಲ್ಲಿ ಪ್ರಕಟಗೊಂಡ ಸುದ್ದಿ...
ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ.

ವಿ.ಕದಲ್ಲಿ ವ್ಯಾಸರ ಬಗೆಗಿನ ಲೇಖನಗಳು...

ಎಂ.ವ್ಯಾಸ ನಿಧನದ ಸುದ್ದಿ ವಿ.ಕದಲ್ಲಿ...


ಗೆಳೆಯ ಸುಧನ್ವ ದೇರಾಜೆ `ವಿಜಯ ಕರ್ನಾಟಕ'ದಲ್ಲಿ ಬರೆದ ಲೇಖನ.