Sunday, July 27, 2008


ಅವರಲ್ಲೊಂದು ಕ್ಷಮೆ ಕೇಳಿ...

ರಡಕ್ಷರದ ಕಥೆಗಾರ ಎಂದೇ ಖ್ಯಾತಿ ಪಡೆದ ಎಂ.ವ್ಯಾಸ ನಮ್ಮೆಲ್ಲನ್ನು ಬಿಟ್ಟು ದೂರ ಹೋಗಿದ್ದಾರೆ...
ಒಂದೂವರೆ ತಿಂಗಳ ಹಿಂದೆ ಅವರ ಮನೆಗೆ ಹೋಗಿದ್ದೆ... ಅದು ಅಚಾನಕ್. ಹಾಗೇ ಊರಿಗೆ ಹೋದಾಗ ಅವರನ್ನು ಮಾತನಾಡಿಸುವ ಮನಸ್ಸಾಯಿತು. ಸಂಜೆ 5.30ರ ಹೊತ್ತಿಗೆ ಹೋಗಿದ್ದೆ...ಅವರು ಒಬ್ಬರೇ ಇದ್ದರು. ಒಂದಷ್ಟು ಹೊತ್ತು ಕುಳಿತು ಹರಟಿದೆವು. ಅವರ ಮೊಮ್ಮಗ ದೊಡ್ಡ ಲೋಟದಲ್ಲಿ ಚಹಾ ತಂದಿಟ್ಟ. `ಸರ್...ನಿಮ್ಮ ಬರಹಗಳನ್ನು ಒಂದು ಬ್ಲಾಗ್ನಲ್ಲಿ ಹಾಕಿದರೆ ಹೇಗೆ...' ಎಂದು ಹೇಳಿದ್ದೆ. `ಅದನ್ನು ಪುನಾ ನೀವು ಕುಟ್ಟಬೇಕಲ್ವಾ...ಯಾಕೆ ಅದೆಲ್ಲಾ...ಇನ್ನು...ಮಾಡೋದಾದ್ರೆ ಮಾಡಿ...' ಎಂದು ಹೇಳಿದ್ದರು... ಅದೇ ಮಾಮೂಲು ಗಡಿಬಿಡಿಯಲ್ಲಿ ಅದನ್ನು ಪೂರೈಸಲಾಗಲಿಲ್ಲ. ಇದ್ದಕ್ಕಿದ್ದಂತೆ ಆ ಮಹಾಚೇತನ ಮರೆಯಾದಾಗ ನೋವು ತಡಕೊಳ್ಳಲಾಗಿಲ್ಲ... ಇದೀಗ ಅವರು ದೂರ ಹೋಗಿದ್ದಾರೆ...ಅವರ ಅಗಾಧವಾದ ಸಾಹಿತ್ಯವನ್ನು ನಮ್ಮೆಲ್ಲರ ಮುಂದಿರಿಸಿ... ವ್ಯಾಸರು ದೂರ ಹೋಗಿದ್ದಾರೆ...ಅವರ ನೆನಪು ಎಂದೆಂದಿಗೂ ಹಚ್ಚ ಹಸಿರು... ಇದೀಗ ಅವರ ಬಗೆಗಿನ ಲೇಖನಗಳನ್ನು , ಮಾಹಿತಿಯನ್ನು ಕ್ರೋಢೀಕರಿಸುವುದು ನನ್ನ ಉದ್ದೇಶ, ಎಂ.ವ್ಯಾಸರ ಅಭಿಮಾನಿಗಳು ಇದಕ್ಕೆ ಸಹಕರಿಸುವ ಪೂರ್ಣ ಭರವಸೆ ನನ್ನದು..ಇಂತು ನಿಮ್ಮ ಪ್ರೀತಿಯ...

ಹರೀಶ್ ಕೆ.ಆದೂರು.

4 comments:

ಭಾವನೆಗಳಿಗೆ ಜೀವ ತುಂಬುತ್ತ... said...

good.... tumba tumba chennagide....

ಮಹೇಶ್ ಪುಚ್ಚಪ್ಪಾಡಿ said...

ಹಾಯ್,
ಒಳ್ಳೆಯ ಕೆಲಸ.ವ್ಯಾಸ ಪಥ ಚೆನ್ನಾಗಿ ಮೂಡಿಬರಲಿ.

ವಿಜಯ್ ಜೋಶಿ said...

It's heartening to see your concern for late Mr. Vyasa.

ಇಂಚರ said...

vyasara pathadha bagge blAg chennagidhe.
with regards,

IRSHAD M VENUR
JOURNALISM SECTION
SDM COLLEGE
UJIRE